ಭಾರತೀಯತೆ

ಎಲ್ಲಾದರೂ ಇರು
ಎಂತಾದರೂ ಇರು
ನೀ ಎಂದೆಂದಿಗೂ ಭಾರತೀಯನಾಗಿರು
ಭಾರತೀಯತೆ ಸತ್ಯ ಭಾರತೀಯತೆ ನಿತ್ಯ

ಭಾರತಾಂಬೆ ಓ ಮುದ್ದಿನ ಮಗು
ಭಾರತೀಯತೆ ನಿನ್ನಲ್ಲಿದರೆ
ಭಾರತಾಂಬೆಯ ಹೆಮ್ಮಯ ಪುತ್ರ
ಭಾರತಾಂಬೆಗೆ ನೀ ಕಲ್ಪತರು

ನೀ ನಡೆದಾಡುವ ನೆಲವೆಲ್ಲ ಭಾರತೀಯತೆ
ನೀ ಉಸಿರಾಡುವ ಗಾಳಿಯಲ್ಲ ಭಾರತೀಯತೆ
ರಾಮ ಸೀತೆಯರಿಗಾಗಿ ಎರಗೂವ ಮನ
ಹರಿದು-ಹಂಚಿಹೋದ ಭಾರತಕ್ಕೆ ಕೊರಗುವ ಮನ

ನೀ ಮುಟ್ಟುವ ಮರ
ಅದೇ ಶ್ರೀಗಂಧದ ಮರ
ನೀ ಕುಡಿಯುವ ನೀರು
ಗಂಗಾ-ಯಮುನ-ಬ್ರಹ್ಮಪುತ್ರ ಕಾವೇರಿ ನೀರು

ಜಾತಿ-ಮತ-ಭೇದ
ಅಳಿಸಿದಂತ ಮನ
ಭಾರತಾಂಬೆಯ ಮಕ್ಕಳೆಂದು
ಸಾರಿ ನುಡಿಯುವ ಮನ ತನುಮನ

ತಾ ಜಾಣಕೆ ಗಿಳಿ ಕೋಗಿಲೆ ಇಂಪಿಗೆ
ಮಲ್ಲಿಗೆ ಸಂಪಿಗೆ ಭಾರತೀಯತೆ
ಹಿತ ನುಡಿಯುವ ಮಾತಿಗೆ
ರೋಮಾಂಚನವಾಗುವ ತನುಮನ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಲ್ಲಿ ಹೋದಳು ಕತೀಜ?
Next post ಆರೋಪ – ೧೧

ಸಣ್ಣ ಕತೆ

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys